Connect with us

ಕಾರ್ಕಳ

ಸಾಂತೂರು ಶ್ರೀ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಧಾರ್ಮಿಕ ಮುಂದಾಳು ಸುಧೀರ್ ರಾವ್ ಆಯ್ಕೆ

Published

on

ಇತಿಹಾಸ ಪ್ರಸಿದ್ಧ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸಾಮಾಜಿಕ ಧಾರ್ಮಿಕ ಮುಂದಾಳು ಯುವ ಉದ್ಯಮಿ ಸುಧೀರ್‌ ರಾವ್ ಆಯ್ಕೆಯಾಗಿದ್ದಾರೆ.‌

ಈ ಸಂಬಂದ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಸುಧೀರ್ ರಾವ್ ಅವರನ್ನು ಹಾಜರಿರುವ ಸದಸ್ಯರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಒಟ್ಟು 7 ಸದಸ್ಯರು ಉಪಸ್ಥಿತರಿದ್ದು ಇನ್ನಿಬ್ಬರು ಸದಸ್ಯರ ಅನುಪಸ್ಥಿತಿಯಿದ್ದರೂ 7 ಸದಸ್ಯರ ಒಮ್ಮತದಿಂದ ಸುಧೀರ್ ರಾವ್ ಅವರ ಹೆಸರನ್ನು ಸೂಚಿಸಿದರು. ಸೂಚಿತ ಹೆಸರನ್ನು ಯಾರೂ ವಿರೋದ ಮಾಡದ ಕಾರಣ ಸುಧೀರ್ ರಾವ್ ಅವರನ್ನು ಅಧ್ಯಕ್ಷರಾಗಿ ಘೋಷಿಸಲಾಯಿತು.

ದೇವಸ್ಥಾನದ ಆಡಳಿತಾಧಿಕಾರಿ ಹೆಚ್. ಜಗದೀಶ್ ಅವರು ಆಯ್ಕೆ ಪ್ರಕ್ರೀಯೆಯನ್ನು ನಡೆಸಿಕೊಟ್ಟರು. ಸಭೆಯ ಬಳಿಕ ವ್ಯವಸ್ಥಾಪನಾ ಸಮಿತಿಯ ಎಲ್ಲಾ ಸದಸ್ಯರು ಸುಧೀರ್‌ ರಾವ್ ಅವರನ್ನು ಅಭಿನಂದಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending